ಚಿತ್ರಲೇಖಾ ಉಷಾಳಾ ಸ್ನೇಹಿತೆ ಮತ್ತು ಬಾಣಾಸುರನ ಮಂತ್ರಿಯ ಮಗಳು. ಅವನು ತನ್ನ ರಾಜಧಾನಿಯಾದ ಶೋನಿತಪುರವನ್ನು ಆಳುತ್ತಿದ್ದನು. ಉಷಾಳನ್ನು ತನ್ನ ಪ್ರೇಮಿಯಾದ ಅನಿರುದ್ಧನೊಂದಿಗೆ ಒಂದುಗೂಡಿಸಲು ಅವಳು ತನ್ನ ಮಾಂತ್ರಿಕ ಶಕ್ತಿಯನ್ನು ಬಳಸುತ್ತಾಳೆ. == ದಂತಕಥೆ == ಬಾಣಾಸುರನ ಮಗಳು ಉಷಾ ಒಮ್ಮೆ ಕೃಷ್ಣನ ಮೊಮ್ಮಗ ಅನಿರುದ್ಧನನ್ನು ಮದುವೆ ಆಗುವ ಕನಸು ಕಂಡಳು. ಆದರೆ ಉಷಾಳಿಗೆ ಆ ಯುವಕನ ಗುರುತು ಸರಿಯಾಗಿ ತಿಳಿದಿರಲಿಲ್ಲ. ಆದರೂ ಆಕೆ ಅವನನ್ನು ಪ್ರೀತಿಸುತ್ತಿದ್ದಳು. ಮರುದಿನ ಬೆಳಿಗ್ಗೆ, ತನ್ನ ಸ್ನೇಹಿತೆಯ ಕಥೆಯನ್ನು ಕೇಳಿದ ನಂತರ ಮತ್ತು ಅವಳ ಚಿಂತಾಕ್ರಾಂತ ಮುಖವನ್ನು ಕಂಡ ನಂತರ, ಚಿತ್ರಲೇಖಾ ಅನೇಕ ಪ್ರಸಿದ್ಧ ಆಕರ್ಷಕ ರಾಜಕುಮಾರರ ಭಾವಚಿತ್ರಗಳನ್ನು ಮಾಡಿದಳು. ಆದರೆ ಉಷಾ ಅವರನ್ನು ತನ್ನ ಕನಸಿನ ಯುವಕನೆಂದು ಗುರುತಿಸಲಿಲ್ಲ. ನಂತರ ಅವಳು ಅನಿರುದ್ಧನ ಭಾವಚಿತ್ರವನ್ನು ಬಿಡಿಸಿದಳು, ಆಗ ಉಷಾಳಿಗೆ ತುಂಬಾ ಸಂತೋಷವಾಯಿತು. ಚಿತ್ರಲೇಖಾ ತನ್ನ ಆಲೋಚನಾ ಶಕ್ತಿಯನ್ನು ಬಳಸಿದಳು. ಚಿತ್ರಲೇಖಾ ನಾರದನ ರಕ್ಷಣೆಯನ್ನು ಕೋರಿದಳು ಮತ್ತು ನಂತರ ವಿಮಾನದಲ್ಲಿ ದ್ವಾರಕೆಗೆ ಪ್ರಯಾಣ ಬೆಳೆಸಿದಳು. ತನ್ನ ಸ್ನೇಹಿತೆಯ ಕನಸನ್ನು ಯುವಕರಿಗೆ ವಿವರಿಸಿದ ನಂತರ, ಅವಳು ಅನಿರುದ್ಧನನ್ನು ಷೋನಿತಾಪುರದಲ್ಲಿ ಯಾರ ಗಮನಕ್ಕೂ ಬಾರದೆ ಉಷಾಳ ಕೋಣೆಗೆ ಕರೆದೊಯ್ದಳು. == ಉಲ್ಲೇಖಗಳು ==